ಸನಾತನ ಧರ್ಮದ ಅಧ್ಯಯನಕ್ಕೆ ಬಂದ ನಾರ್ವೆ ಪ್ರಜೆಗಳು!

ಸನಾತನ ಧರ್ಮದ ಆಚಾರ, ವಿಚಾರ ಕಲಿಯಲು ಯಲ್ಲಾಪುರಕ್ಕೆ ಬಂದ ನಾರ್ವೆ ಪ್ರಜೆಗಳು!

ವಿದೇಶಿಗರೇ ಭಾರತೀಯ ಸಂಸ್ಕೃತಿ ಅಧ್ಯಯನ್ನ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸನಾತನ ಧರ್ಮದ ಸಂಪ್ರದಾಯಗಳನ್ನ ಅಚ್ಚುಕಟ್ಟಾಗಿ ಪಾಲಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ನಾರ್ವೆಯ ‘ಬ್ಯಾಕ್ ಇನ್ ದ ರಿಂಗ್ʼಎಂಬ ಸ್ವಯಂ ಸೇವಾ ಸಂಸ್ಥೆಯ23 ಮಂದಿ ವಿದೇಶಿಗರು

ಯಲ್ಲಾಪುರದ ಸಂಹಿತಾ ಟ್ರಸ್ಟ್ ಪ್ರಮುಖ ವಿಘ್ನೇಶ್ವರ ಭಟ್ಟ ಅವರ ಮನೆಯಲ್ಲಿ ವಾಸವಿದ್ದಾರೆ

ಯೋಗಾಸನ, ಜಪ, ವೇದಘೋಷ, ಹೋಮ, ಪೂಜೆ ಇತ್ಯಾದಿ ಚಟುವಟಿಕೆಗಳನ್ನು ಕಲಿಯುತ್ತಿದ್ದಾರೆ.

ಭಾರತೀಯ ಜೀವನ ಪದ್ಧತಿ ಕಲಿಯಲು ನಾರ್ವೆ ಪ್ರಜೆಗಳು ಕಳೆದ 2014ರಿಂದಲೂ ಬರುತ್ತಿದ್ದಾರೆ

ವಿಘ್ನೇಶ್ವರ ಭಟ್ಟ ಅವರು ಈವರೆಗೆ ನೂರಾರು ಜನರಿಗೆ ತರಬೇತಿ ನಿಡಿದ್ದಾರೆ.

ಬಂದಿರುವ ತಂಡ ಒಂದು ವಾರ ಕಾಲ ಇಲ್ಲೇ ನೆಲೆ ನಿಂತು ಭಾರತೀಯ ಸಂಸ್ಕೃತಿಯನ್ನ ಅಧ್ಯಯನ ನಡೆಸಿ ಮರಳಿ ತವರಿಗೆ ತೆರಳಲಿದೆ.