ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೂ ಮುನ್ನ 11 ದಿನಗಳ ವಿಶೇಷ ಆಚರಣೆ ಪ್ರಾರಂಭಿಸಿದ ಮೋದಿ

ರಾಮಲಲ್ಲಾ ಪ್ರಾಣ ಪ್ರತಿಷ್ಠೆಯ ವಿಶೇಷ ಆಚರಣೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.

ಇಂದಿನಿಂದ11 ದಿನಗಳ ವಿಶೇಷ ಆಚರಣೆ ಆರಂಭಿಸುತ್ತಿದ್ದೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ನಡೆಯಲಿದೆ.

ಜನವರಿ 22 ರಂದು ಮೋದಿ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರವನ್ನು ಉದ್ಘಾಟಿಸಲಿದ್ದಾರೆ.

‘ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಗೆ ಕೇವಲ 11 ದಿನಗಳು ಉಳಿದಿವೆ.

ಸಿಯಾವರ್ ರಾಮ್ ಚಂದ್ರ ಕೀ ಜೈ ಎಂದು ಹೇಳುವ ಮೂಲಕ ತಮ್ಮ ಸಂದೇಶವನ್ನು ಪ್ರಾರಂಭಿಸಿದ ಮೋದಿ

ಜೀವನದ ಕೆಲವು ಕ್ಷಣಗಳು ದೈವಿಕ ಆಶೀರ್ವಾದದಿಂದ ಮಾತ್ರ ವಾಸ್ತವಕ್ಕೆ ತಿರುಗುತ್ತವೆ.

ಜೀವನದಲ್ಲಿ ಮೊದಲ ಬಾರಿಗೆ ನಾನು ಭಕ್ತಿಯ ವಿಭಿನ್ನ ಭಾವನೆಯನ್ನು ಅನುಭವಿಸುತ್ತಿದ್ದೇನೆ.

ಈ ಪುಣ್ಯ ಸಂಧರ್ಭದಲ್ಲಿ ನಾನು ದೇವರ ಪಾದದಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ ಮೋದಿ.