ವೇಣೂರಿನ ಬಾಹುಬಲಿಯ ಮಹಾಮಸ್ತಕಾಭಿಷೇಕವನ್ನು ಕಣ್ತುಂಬಿಕೊಳ್ಳಿ!

ಶುದ್ಧ ಕಾಶ್ಮೀರಿ ಕೇಸರಿಯ ಅಭಿಷೇಕ ಮತ್ತು ಚಂದನ ಅಭಿಷೇಕ ಹೀಗೆ ಎಲ್ಲಾ ದ್ರವ್ಯಗಳಿಂದ ಬಾಹುಬಲಿ ಸೌಂದರ್ಯ ಇಮ್ಮಡಿಯಾಗಿದೆ.

ಈ ಅಪರೂಪದ ಕ್ಷಣವನ್ನು ಸಾವಿರಾರು ಜನ ಕಣ್ತುಂಬಿಕೊಂಡಿದ್ದಾರೆ.

ಜಲಾಭಿಷೇಕ ಪಡೆದ ಬಾಹುಬಲಿ ಮಸ್ತಕಾಭಿಷೇಕಕ್ಕೆ ಸಜ್ಜಾದಾಗ ಜನರ ಕಣ್ಣುಗಳಲ್ಲಿ ಅದ್ಭುತವನ್ನು ನೋಡೋ ದೃಶ್ಯ ಕಂಡುಬಂದಿದೆ

ಶಿರದಿಂದ ಪಾದದವರೆಗೆ ಅಭಿಷೇಕದ ದ್ರವ್ಯ ಪಸರಿಸಿದಾಗ ಸುತ್ತಲಿನ ವಾತಾವರಣದಲ್ಲಿ ವಿದ್ಯುತ್ ಸಂಚಾರ ಆರಂಭವಾಗಿದೆ.

ಈ ಮಹಾಮಸ್ತಕಾಭಿಷೇಕ ಪ್ರಕ್ರಿಯೆ ಮಧ್ಯ ರಾತ್ರಿಯವರೆಗೆ ನಡೆಯಿತ್ತು

ಭಕ್ತರು ಮಾತ್ರ ಒಂದಿಂಚೂ ಕದಲದೆ ತಂಪಾದ ರಾತ್ರಿ ಯಲ್ಲಿ ಬಾಹುಬಲಿಯನ್ನು ಕಣ್ತುಂಬಿಕೊಂಡಿದ್ದಾರೆ.

ಜಾತಿ ಮತ ಧರ್ಮದ ಬೇಧ ಇಲ್ಲದೇ ಜನ ಈ ಮಸ್ತಕಾಭಿಷೇಕದ ಸಂಭ್ರಮದಲ್ಲಿ ಪಾಲ್ಗೊಳ್ಳೋದು ವಿಶೇಷವಾಗಿದೆ.

ಪ್ರತಿದಿನ ಮೂರು ಸಾವಿರಕ್ಕೂ ಅಧಿಕ ಜನ ಫಲಾಹಾರ ಅನ್ನಪ್ರಸಾದವನ್ನು ಸ್ವೀಕರಿಸುತ್ತಿದ್ದಾರು.

ಜೈನ ಶೈಲಿಯ ಅಡುಗೆ ಸ್ವೀಕರಿಸಿದ ಜನ ವಾವ್ ಅಂದಿದ್ದಾರೆ.