ಮದುವೆ ಮಂಟಪದಲ್ಲಿ ಮತದಾನ ಜಾಗೃತಿ ಮೂಡಿಸಿದ ಅಧಿಕಾರಿಗಳು!

ಮದುವೆಗೆ ಆಗಮಿಸಿದ್ದ ಜನರಿಗೆ ತಪ್ಪದೇ ಮತದಾನ ಮಾಡುವಂತೆ ಜಾಗೃತಿ ಮೂಡಿಸಿದರು.

ಒಂದೆಡೆ ಸಂಭ್ರಮದಿಂದ ಇರುವ ಗಂಡು, ಹೆಣ್ಣು. ಇನ್ನೊಂದೆಡೆ ಮತ ಹಾಕಿ ಎನ್ನುವ ಬೋರ್ಡ್.

ಹೌದು ಈ ಮತದಾನ ದೃಶ್ಯಗಳು ಕಂಡು ಬಂದಿದ್ದ ಚಿಕ್ಕಮಗಳೂರಿನಲ್ಲಿ.

ಲೋಕಸಭಾ ಚುನಾವಣೆಯಲ್ಲಿ ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲಾ ಆಡಳಿತ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ.

ಚಿಕ್ಕಮಗಳೂರುನಲ್ಲಿ ನಿಶ್ಚಯವಾಗಿದ್ದ ಕಾವ್ಯಾ - ರಾಜೇಶ್ ಮದುವೆ ಸಮಾರಂಭದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ನೇತೃತ್ವದಲ್ಲಿ ಮತದಾನ ಜಾಗೃತಿ

ಮದುವೆ ಶುಭಾಶಯ ಕೋರುವ ಜತೆಗೆ ಆಗಮಿಸಿದ್ದ ಜನರಿಗೆ ತಪ್ಪದೇ ಮತದಾನ ಮಾಡುವಂತೆ ಪ್ಲೇ ಕಾರ್ಡ್ ಹಿಡಿದು ಜಾಗೃತಿ ಮೂಡಿಸಿದರು.

ಕಲ್ಯಾಣ ಮಂಟಪದ ಮುಂಭಾಗ ಸೆಲ್ಫಿ ಸ್ಟ್ಯಾಂಡ್ ಸಹ ಇಡಲಾಗಿತ್ತು. ಮದುವೆಗೆ ಬಂದಿದ್ದ ಜನರು ಫೋಟೋ ಕ್ಲಿಕ್ಕಿಸಿಕೊಂಡರು.

ಅಧಿಕಾರಿಗಳ ಕೆಲಸಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲರೂ ಮತದಾನ ಮಾಡಿ ಎನ್ನುವ ಸಂದೇಶ ಹಬ್ಬುತ್ತಿದೆ.