ವುಶು ಕ್ರೀಡೆಯಲ್ಲಿ ಹೊನ್ನಾವರದ ಬಾಲಕಿಯ ಸಾಧನೆ!

ವುಶುವಿನಲ್ಲಿ ಕರ್ನಾಟಕಕ್ಕೆ ಕಂಚಿನ ಪದಕ ತಂದು ಕೊಟ್ಟ ಹೊನ್ನಾವರದ ಬಾಲಕಿ!

ವುಶು ಲೀಗ್‍ನ ಫೈನಲ್ ವಿಭಾಗದಲ್ಲಿ ಕೃತ್ತಿಕಾ ಕರ್ನಾಟಕಕ್ಕೆ ಕಂಚಿನ ಪದಕ ತಂದು ಕೊಟ್ಟರು.

ಚೀನಾದ ಯುದ್ಧ ವಿದ್ಯೆಯಾದ ಇದರಲ್ಲಿ ಉತ್ತರ ಕನ್ನಡದ ಪುಟ್ಟ ಬಾಲಕಿಯರು ಮಹಾನ್ ಸಾಧನೆ ಮಾಡಿದ್ದಾರೆ.

ಹೌದು ಹೊನ್ನಾವರದ ಈ ಬಾಲಕಿ ಈಗ ರಾಜ್ಯವನ್ನು ಪ್ರತಿನಿಧಿಸಿ ವುಶು ಕ್ರೀಡೆಯಲ್ಲಿ ವಿಜೇತೆಯಾಗಿದ್ದಾರೆ.

ಜಮ್ಮುವಿನಲ್ಲಿ ನಡೆದ ಖೇಲೋ ಇಂಡಿಯಾ ವುಶು ಲೀಗ್‍ನಲ್ಲಿ ಹೊನ್ನಾವರದ ಆರಾಧ್ಯಾ ನಾಯಕ್ ಹಾಗೂ ಕೃತ್ತಿಕಾ ಡಿ.ಕೆ ಪ್ರತಿನಿಧಿಸಿದ್ದರು.

ಭಾರೀ ಪೈಪೋಟಿಯ ಮ್ಯಾಚುಗಳಲ್ಲಿ ಆರಾಧ್ಯಾ ನಾಯಕ್ ಕರ್ನಾಟಕಕ್ಕೆ ಕಂಚಿನ ಪದಕ ಗಳಿಸಿ ಕೊಟ್ಟರು.

ಹಾಗೆಯೇ ವುಶು ಲೀಗ್‍ನ ಫೈನಲ್ ವಿಭಾಗದಲ್ಲಿ ಕೃತ್ತಿಕಾ ಡಿ ಕೆ ಕರ್ನಾಟಕಕ್ಕೆ ಕಂಚಿನ ಪದಕ ತಂದು ಕೊಟ್ಟರು.

ಇವರಿಬ್ಬರೂ ಕೂಡ ರಾಯಲ್ ಅಕಾಡೆಮಿ ಹೊನ್ನಾವರದಲ್ಲಿ ರಾಘವೇಂದ್ರ ನಾಯಕ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

ಇನ್ನು ಮುಂದೆ ಇಬ್ಬರೂ ಕೂಡ ಬಂಗಾರದ ಪದಕವನ್ನು ಗೆಲ್ಲುವ ಆಸೆಯನ್ನು ಹೊಂದಿದ್ದಾರೆ.