ಕೋರ್ಟ್ ಮೆಟ್ಟಿಲೇರಿದ ನಟಿ ಸಪ್ತಮಿಗೌಡ!

ಸ್ಯಾಂಡಲ್‌ವುಡ್‌ನ ದೊಡ್ಮನೆಯ ಮೊಮ್ಮಗ ಯುವ ರಾಜ್‌ಕುಮಾರ್ ಬಾಳಲ್ಲಿ ಬಿರುಗಾಳಿ ಎದ್ದಿದೆ.

ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಶ್ರೀದೇವಿ ಹಾಗೂ ಯುವರಾಜ್‌ಕುಮಾರ್ ಡಿವೋರ್ಸ್ ಕೊಡೋದಕ್ಕೆ ಮುಂದಾಗಿದ್ದಾರೆ.

ಶ್ರೀದೇವಿ ಯುವ ರಾಜ್‌ಕುಮಾರ್‌ಗೆ ಸ್ಯಾಂಡಲ್‌ವುಡ್ ನಟಿಯೊಬ್ಬಳ ಜೊತೆ ಸಂಬಂಧ ಇತ್ತು ಅಂತ ಆರೋಪ ಮಾಡಿದ್ದಾರೆ.

ಇನ್ನೂ ಈ ಬಗ್ಗೆ ನಟಿ ಸಪ್ತಮಿಗೌಡ ಕೂಡ ಶ್ರೀದೇವಿ ವಿರುದ್ಧ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಯುವರಾಜ್‌‌ಕುಮಾರ್‌ ಜೊತೆ ತನ್ನ ಹೆಸರು ಬಂದಿದೆ. ಮಾನ ಹಾನಿ ಮಾಡದಂತೆ ಯುವ ಪತ್ನಿ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ.

ತನ್ನ ವಿರುದ್ಧ ಮಾನಹಾನಿಕಾರಕ ಹೇಳಿಕೆ ನೀಡಿ ಶ್ರೀದೇವಿ ವಿರುದ್ಧ ಸಪ್ತಮಿ ಗೌಡ ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ.

ಇಲ್ಲಸಲ್ಲದ ಆರೋಪ ಹೋರಿಸಿ ಚಾರಿತ್ರ್ಯವಧೆ ಮಾಡಲಾಗುತ್ತಿದೆ ಎಂದು ಸಪ್ತಮಿ ಗೌಡ ಆರೋಪಿಸಿದ್ದಾರೆ

ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್, ಮಾನಹಾನಿಕಾರಕ ಹೇಳಿಕೆ ನೀಡದಂತೆ ನಿರ್ಬಂಧ ಹೊರಡಿಸಿದೆ.

ಅಲ್ಲದೇ ಅರ್ಜಿ ಸಂಬಂಧ ಶ್ರೀದೇವಿ ಭೈರಪ್ಪಗೂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.