ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಬಲಮುರಿ ಫಾಲ್ಸ್‌ ಈಗ ಪ್ರವಾಸಿಗರ ನೆಚ್ಚಿನ ತಾಣವಾಗಿದೆ

ಇಲ್ಲಿ ಹರಿಯುವ ಕಾವೇರಿ ನದಿಯ ನೀರಿನಲ್ಲಿ ಮೋಜು ಮಸ್ತಿಯನ್ನು ಮಾಡಿ ಖುಷಿ ಪಡುತ್ತಿದ್ದಾರೆ

ಈ ಬಾರಿಯ ಬೇಸಿಗೆಯಿಂದ ಕಳೆಗುಂದಿದ್ದ ಬಲಮುರಿ ಫಾಲ್ಸ್‌ ಈಗ ಮತ್ತೆ ಜೀವಕಳೆ ಪಡೆದಿದೆ

ವಾರಾಂತ್ಯದಲ್ಲಂತೂ ಪ್ರವಾಸಿಗರ ಸಂಖ್ಯೆ ಡಬಲ್‌ ಇರುತ್ತವೆ

ವಿಸ್ತಾರವಾಗಿರುವ ಈ ಬಲಮುರಿ ಅಷ್ಟೇನೂ ರಿಸ್ಕ್‌ ಇಲ್ಲ. ಇನ್ನೇನಾದ್ರೂ ಈಜು ಬರಲ್ಲ ಅಂತಿದ್ರೂ ದೋಣಿ ವಿಹಾರ ನಡೆಸುವ ಅವಕಾಶನೂ ಇದೆ

 ಕೆಆರ್‌ಎಸ್ ಜಲಾಶಯಕ್ಕೆ ಹೋಗುವ ಮೊದಲು ಸಿಗುವ ಈ ಬಲಮುರಿ ಫಾಲ್ಸ್‌ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತದೆ

ಮೈಸೂರಿನಿಂದ ಕೇವಲ 16 ಕಿಲೋ ಮೀಟರ್‌ ದೂರದಲ್ಲಿದೆ. ಸದ್ಯ ಮಳೆಯು ಉತ್ತಮವಾಗಿ ಸುರಿಯುತ್ತಿರುವುದರಿಂದ ಬಲಮುರಿ ಫಾಲ್ಸ್‌ ನೋಡುವುದಕ್ಕೂ ಭಾರೀ ಆಕರ್ಷಣೀಯವಾಗಿ ಕಾಣುತ್ತಿದೆ

ಬೀದರ್‌ನಲ್ಲಿ ಪತ್ತೆಯಾದ ಈ ಪುರಾತನ ದೇಗುಲದ ಕುರಿತು ನಿಮಗೇನಾದ್ರೂ ಗೊತ್ತಾ?