ನಟ ಕಿಚ್ಚ ಸುದೀಪ್ ಅವರು ದರ್ಶನ್ ಬಗ್ಗೆ ಹೇಳಿದ್ದೇನು? ಕೇಸ್ ಬಗ್ಗೆ ಏನಂದ್ರು ನಟ?

ನಾನು ಮೊದಲಿನಿಂದ ಮಾತನಾಡಿಕೊಂಡಿದ್ದರೆ ನಿಜವಾಗಲೂ ದರ್ಶನ್ ರನ್ನು ಹೋಗಿ ಮಾತನಾಡಿಸುತ್ತಿದ್ದೆ.

ನಾವಿಬ್ಬರೂ ಸರಿಯಿಲ್ಲ. ನಾಟಕೀಯವಾಗಿ ಇರೋಕೆ ಬರಲ್ಲ. ನಮ್ಮ ಇಬ್ಬರ ರೂಟ್ ಎಲ್ಲ ಬೇರೆ ಎಂದು ಹೇಳಿದ್ದಾರೆ.

ಅವರಿಗೆ ಪಬ್ಲಿಕ್ ಲ್ಲಿ ಅವಮಾನ ಆಗಿದ್ದಾಗ ನಾನು ಟ್ವಿಟ್ ಮಾಡಿದೆ. ಅದು ನನ್ನ ಕರ್ತವ್ಯ.

ದರ್ಶನ್ ಬಗ್ಗೆ ಸುದೀಪ್ ಮಾತನಾಡಿದ್ದು, ನಾನು ಒಳಗೆ ಹೋಗಿ ಅವರನ್ನ ಹೊರಗೆ ಕಳಸಬೇಕಾ ಎಂದು ಮರು ಪ್ರಶ್ನಿಸಿದ್ದಾರೆ.

ನಾನು ಮಾತನಾಡಿ ದರ್ಶನ್ ಕುಟುಂಬಕ್ಕೆ ಬೇಜಾರು ಮಾಡಲ್ಲ ಎಂದು ಕಿಚ್ಚ ಅವರು ಉತ್ತರ ನೀಡಿದ್ದಾರೆ.

ನಟ ತಮ್ಮ ಬರ್ತ್ ಡೇ ದಿನ ಅಭಿಮಾನಿಗಳು ಮನೆ ಹತ್ತಿರ ಬರಬೇಡಿ ಎಂದು ಕೇಳಿಕೊಳ್ಳಲು ಸುದ್ದಿಗೋಷ್ಠಿ ಮಾಡಿದ್ದರು.

ಕಳೆದ ವರ್ಷ ಬರ್ತ್ ಡೇಗೆ 50 ಸಾವಿರಕ್ಕೂ ಜಾಸ್ತಿ ಜನರು ಸೇರಿದ್ದರು. ಗಲಾಟೆಗಳಾಗಿತ್ತು ಎಂದು ಕಿಚ್ಚ ಹೇಳಿದ್ದಾರೆ.

ಈ ವರ್ಷ ಬರ್ತ್ ಡೇ ಜಯನಗರ MES ಗ್ರೌಂಡ್ ನಲ್ಲಿ ಸೆಲಬ್ರೆಟ್ ಮಾಡಿಕೊಳ್ತೀನಿ ಎಂದು ಕಿಚ್ಚ ಹೇಳಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬರ್ತ್ ಡೇ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಮಾಡಿದ್ದಾರೆ.