ಆಚಾರ್ಯ ಚಾಣಕ್ಯರ ಪ್ರಕಾರ ಜೀವನದಲ್ಲಿ ನಾವು ಕೆಲವು ಜನರಿಂದ ದೂರ ಇದ್ದರೆ ಬಹಳ ಒಳ್ಳೆಯದು. ಏಕೆಂದರೆ ಕೆಲ ಕೆಟ್ಟ ಗುಣಗಳನ್ನ ಹೊಂದಿರುವ ಜನರು ನಿಮ್ಮ ಜೀವನವನ್ನ ಸಹ ನರಕವಾಗಿಸುತ್ತಾರೆ
ಈ ಜ್ಞಾನದ ಆಧಾರದ ಮೇಲೆ, ಅವರು ನಮ್ಮ ಜೀವನ ಹೇಗಿರಬೇಕು, ಯಾರ ಜೊತೆ ಸ್ನೇಹ ಮಾಡಬೇಕು ಎಂಬುದರ ಬಗ್ಗೆ ಸಹ ತಿಳಿಸಿದ್ದಾರೆ. ಅವರ ಪ್ರಕಾರ ನಾವು ಕೆಲವು ಗುಣಗಳನ್ನ ಹೊಂದಿರುವ ಜನರಿಂದ ದೂರ ಇರಬೇಕು
ಇನ್ನು ಸ್ವಾರ್ಥಿ ಮಹಿಳೆಯರಿಂದ ದೂರ ಇರಬೇಕು ಎನ್ನಲಾಗುತ್ತದೆ. ಯಾವ ಮಹಿಳೆ ತನ್ನ ಕುಟುಂಬದ ಬಗ್ಗೆ ಯೋಚನೆ ಮಾಡುವುದಿಲ್ಲವೋ ಹಾಗೂ ಕೇವಲ ತನ್ನ ಬಗ್ಗೆ ಯೋಚನೆ ಮಾಡುತ್ತಾಳೆಯೊ, ಅವರಿಂದ ನೀವು ದೂರ ಇದ್ದರೆ ಬಹಳ ಉತ್ತಮ
ಕೇವಲ ಹಣದ ಬಗ್ಗೆ ಯೋಚನೆ ಮಾಡುವ ಜನರು ಅಥವಾ ಪದೇ ಪದೇ ಆರ್ಥಿಕ ಸಮಸ್ಯೆಗೆ ಸಿಲುಕುವ ಜನರಿಂದ ದೂರ ಇದ್ದರೆ ಬಹಳ ಉತ್ತಮ. ಅವರು ಮುಂದಿನ ದಿನಗಳಲ್ಲಿ ನಿಮ್ಮನ್ನ ಸಹ ಆರ್ಥಿಕ ಸಮಸ್ಯೆಗೆ ಸಿಲುಕಿಸಬಹುದು