2016ರಿಂದ 2019ರವೆಗೂ ನಡೆದ ಅಯೋಧ್ಯೆ ಪ್ರಕರಣದಲ್ಲಿ ವಾದ ಮಾಡಿ ಗೆದ್ದವರು ಪರಾಶರನ್‌

ಅಯೋಧ್ಯೆ ಜಾಗ ಶ್ರೀ ರಾಮಚಂದ್ರನಿಗೆ ಸೇರಿದ್ದು ಅಂತ ತೀರ್ಪು ಬರೋಕೆ ಇವರ ಪಾತ್ರ ತುಂಬಾ ಇದೆ

ಹಿಂದೂಗಳ 500 ವರ್ಷಗಳ ಕನಸು ಜನವರಿ 22ರಂದು ನೆರವೇರುತ್ತಿದೆ. ಈ ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳೋಕೆ ಇಡೀ ವಿಶ್ವವೇ ಕಾದು ಕುಳಿತಿದೆ

ಈ ರಾಮಮಂದಿರ ನಿರ್ಮಾಣದ ಹಿಂದೆ ಸಾಕಷ್ಟು ಜನರ ಶ್ರಮವಿದೆ

ಅದರಲ್ಲೂ ಈ ವ್ಯಕ್ತಿಯ ಶ್ರಮ ಹೆಚ್ಚಿದೆ ಅಂದ್ರೆ ತಪ್ಪಾಗಲ್ಲ. ಶ್ರೀರಾಮನಿಗೋಸ್ಕರ ಕೋಟು ತೊಟ್ಟು, ಕೋರ್ಟ್‌ನಲ್ಲಿ ವಾದ ಮಾಡಿ ಗೆದ್ದವರು ಇವ್ರು

ಅಯೋಧ್ಯೆಯಲ್ಲಿ ರಾಮಮಂದಿರ ಇತ್ತು ಅಂತ ವಾದಿಸಿ ಗೆದ್ದವರಿವರು

ಅವರು ಬೇರೆ ಯಾರು ಅಲ್ಲ ಅವರೇ ಕೆ.ಪರಾಶರನ್‌, ಶ್ರೀ ರಾಮನನ್ನೇ ಕಕ್ಷಿದಾರನನ್ನಾಗಿಸಿ ಹೋರಾಡಿ ಗೆದ್ದವರಿವರು

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮತ್ತು ಭಾರತದ ಮಾಜಿ ಅಟಾರ್ನಿ ಜನರಲ್ ಕೆ ಪರಾಶರನ್ ಅವರು ಅಯೋಧ್ಯೆ ಭೂ ವಿವಾದದ ಪ್ರಕರಣವನ್ನು ಯಶಸ್ವಿಯಾಗಿ ಹೋರಾಡಿದವರು

ಮಾಪನ ಕೇಂದ್ರ ವರದಿ ಮಾಡಿದೆ. 6.4 ರ ತೀವ್ರತೆಯ ಭೂಕಂಪನ ದಾಖಲಾಗಿದೆ. ದೆಹಲಿ ಹಾಗೂ ಪಾಕಿಸ್ತಾನದಲ್ಲಿ ಲಘು ಭೂಕಂಪನದ ಅನುಭವವಾಗಿದೆ

1927 ರಲ್ಲಿ ತಮಿಳುನಾಡಿನ ಶ್ರೀರಂಗಂನಲ್ಲಿ ಜನಿಸಿದ ಪರಾಶರನ್ ಅವರು ಧಾರ್ಮಿಕ ಹಿಂದೂ ಹಿನ್ನೆಲೆಯಿಂದ ಬಂದವರು. ಅವರ ತಂದೆ ಕೇಶವ ಅಯ್ಯಂಗಾರ್, ಸಹ ವಕೀಲರು, ವೇದ ವಿದ್ವಾಂಸರು

2016 ರಿಂದ, ಪರಾಶರನ್ ನ್ಯಾಯಾಲಯಕ್ಕೆ ಹಾಜರಾಗುವುದು ಅಪರೂಪ. ಅದರ ನಂತರ ಅವರು ಕೇವಲ ಎರಡು ಪ್ರಕರಣಗಳನ್ನು ತೆಗೆದುಕೊಂಡಿದ್ದಾರೆ

ಅದುವೇ ಶಬರಿಮಲೆ ಪ್ರಕರಣ ಮತ್ತು ಅಯೋಧ್ಯೆ ವಿವಾದ

2016ರಿಂದ 2019ರವೆಗೂ ನಡೆದ ಅಯೋಧ್ಯೆ ಪ್ರಕರಣದಲ್ಲಿ ವಾದ ಮಾಡಿ ಗೆದ್ದವರು ಪರಾಶರನ್‌. ಅಯೋಧ್ಯೆ ಜಾಗ ಶ್ರೀ ರಾಮಚಂದ್ರನಿಗೆ ಸೇರಿದ್ದು ಅಂತ ತೀರ್ಪು ಬರೋಕೆ ಇವರ ಪಾತ್ರ ತುಂಬಾ ಇದೆ

ಅಯೋಧ್ಯೆ ರಾಮ ಭೂಮಿ ಅಲ್ಲದೇ ಇನ್ನೇನು? ಅಂತ ವಾದಿಸಿದ್ದವರು. ಇವರಿಗೆ ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ಕೂಡ ಬಂದಿದೆ

 ರಾಮನನ್ನು ಗೆಲ್ಲಿಸಿದ ಕಾನೂನು ಪೂಜಾರಿ ಈ ಪರಾಶರನ್‌. ಅಯೋಧ್ಯೆಯಲ್ಲಿ 55 ಮಸೀದಿಗಳಿವೆ ಅಲ್ಲಿ ನಮಾಜ್‌ ಮಾಡಬಹುದು. ಆದರೆ ಹಿಂದೂಗಳಿಗೆ ಇರೋದು ಒಂದೇ ಜಾಗ ಅಂತ ವಾದ ಮಾಡಿದ್ದರು. 90 ಇಳಿವಯಸಲ್ಲಿ ದೇವರ ಪರ ನಿಂತು ವಾದಿಸಿ ಗೆದ್ದವರು

ಅಯೋಧ್ಯೆಯಲ್ಲಿ ಜನವರಿ 22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ! ಈ ರಾಜ್ಯಗಳಲ್ಲಿ ಮದ್ಯ ನಿಷೇಧ