ನಿರ್ದೇಶಕ ರಾಘವೇಂದ್ರ ರಾವ್ ಅವರ ನಿರ್ದೇಶನದ ಚಿತ್ರ ಪೆಳ್ಳಿ ಸಂದಡಿ

ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಶ್ರೀಲೀಲಾ ಒಂದೇ ಒಂದು ಸಿನಿಮಾದಿಂದ ಒಳ್ಳೆಯ ಜನಪ್ರಿಯತೆ ಪಡೆದರು

ಈಗಾಗ್ಲೇ ಬ್ಯುಸಿಯಾಗಿರೋ ಈ ನಟಿಗೆ ಸಾಲು ಸಾಲು ಸಿನಿಮಾ ಅವಕಾಶಗಳು ಬರ್ತಿವೆ

ಆಕೆ ಬರೀ ನಟಿಯಲ್ಲ.. ವೈಯಕ್ತಿಕ ಬದುಕಿನಲ್ಲೂ ಹಲವು ವಿವಾದಗಳನ್ನು ಎದುರಿಸುತ್ತಿರುತ್ತಾರೆ

ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ಜನರ 'ದಿಲ್ ಕದ್' ನಟಿಯರು ಇವರೇ ನೋಡಿ!

ವೃತ್ತಿಬದುಕಿನ ಆರಂಭದಲ್ಲಿಯೇ ಒಳ್ಳೆ ಹಿಟ್ ಪಡೆದಿದ್ದ ನಟಿ ಕಳೆದ ವರ್ಷಾಂತ್ಯದಲ್ಲಿ ರವಿತೇಜಾ ಜೊತೆಗಿನ ‘ಧಮಾಕಾ’ ಸಿನಿಮಾದ ಮೂಲಕ ಟಾಲಿವುಡ್ ನ ಕ್ರೇಜಿ ಬ್ಯೂಟಿಯಾದರು

ಈ ವರ್ಷ ಸ್ಕಂದ, ಭಗವಂತ ಕೇಸರಿ ಮತ್ತು ಆದಿಕೇಶವ ಸಿನಿಮಾಗಳ ಮೂಲಕ ಹಿಟ್ ಪಡೆದರು

ಶ್ರೀಲೀಲಾ ಇತ್ತೀಚೆಗೆ ಧಮಾಕಾ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಸೈಮಾ ಪ್ರಶಸ್ತಿಯನ್ನು ಪಡೆದರು. ಇತ್ತೀಚೆಗಷ್ಟೇ ಆಕೆ ನಟಿಸಿದ ಸ್ಕಂದ ಬಾಕ್ಸ್ ಆಫೀಸ್‌ನಲ್ಲಿ ಆವರೇಜ್ ಆಗಿತ್ತು

ಈ ಸಿನಿಮಾದಲ್ಲಿ ಬಾಲಯ್ಯ ಜೊತೆ ನಟಿಸಿದ್ದರು. ದತ್ತು ಮಗಳ ಪಾತ್ರದಲ್ಲಿ ಮಿಂಚಿದ್ದರು. ಒಂದು ತರಹದ ಸ್ಟಾರ್ ಹೀರೋ ಸಿನಿಮಾದಲ್ಲಿ ನಟಿಸಿದ್ದರೂ ತನ್ನ ನಟನೆಯಿಂದ ಇಂಪ್ರೆಸ್ ಮಾಡಿದ್ದಾರೆ

ಅನಿಮಲ್ 'ಜಮಾಲ್ ಕುಡು' ಹಾಡು ವೈರಲ್: ಬಾಬಿ ಡಿಯೋಲ್ ಬಿಚ್ಚಿಟ್ಟ ಅಸಲಿ ಸತ್ಯ!

ಭಗವಂತ ಕೇಸರಿ ಚಿತ್ರದ ಯಶಸ್ಸಿನೊಂದಿಗೆ ಶ್ರೀಲೀಲಾ ಸಂಭಾವನೆಯನ್ನು ಹೆಚ್ಚಿಸಿಕೊಂಡರು

ಈ ಚಿತ್ರಕ್ಕೆ ಒಂದೂವರೆ ಕೋಟಿ ವರೆಗೆ ತೆಗೆದುಕೊಂಡ ನಟಿ ಮುಂದಿನ ಚಿತ್ರಗಳಿಗೆ ರೂ 3 ಕೋಟಿವರೆಗೂ ವಸೂಲಿ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ

ಅದಾದ ನಂತರ ವೈಷ್ಣವ್ ತೇಜ್ ಜತೆಗಿನ 'ಆದಿಕೇಶವ' ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತ್ತು. ಅತಿ ಕಡಿಮೆ ಸಮಯದಲ್ಲಿ ದೊಡ್ಡ ಹೀರೋಗಳ ಜೊತೆ ನಟಿಸುತ್ತಿದ್ದಾರೆ ಶ್ರೀಲೀಲಾ

ಅದರ ಭಾಗವಾಗಿ ಹರೀಶ್ ಶಂಕರ್ ನಿರ್ದೇಶನದ ‘ಉಸ್ತಾದ್ ಭಗತ್ ಸಿಂಗ್’ ಚಿತ್ರದಲ್ಲಿ ಪವನ್ ಕಲ್ಯಾಣ್ ನಾಯಕಿಯಾಗಿ ನಟಿಸುತ್ತಿದ್ದಾರೆ

ಶ್ರೀಲೀಲಾ ಅವರಿಗೆ ಸಾಲು ಸಾಲು ಆಫರ್ ಬರುವುದರೊಂದಿಗೆ ಕನ್ನಡದ ಚೆಲುವೆ ತೆಲುಗಿನ ಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ

Ileana D'Cruz: ಸಿನಿಮಾಗೆ ಗುಡ್ ಬೈ ಹೇಳ್ತಾರಾ ಇಲಿಯಾನಾ? USAಗೆ ಪರ್ಮನೆಂಟ್ ಶಿಫ್ಟ್?