ದೀಪಾವಳಿ ಮುನ್ನವೇ ಸಿಎಂ ಗುಡ್ ನ್ಯೂಸ್!

ಇಂದಿನಿಂದಲೇ 7 ಗಂಟೆ ಉಚಿತ ವಿದ್ಯುತ್, ಸಿಎಂ ಘೋಷಣೆ

ರಾಜ್ಯದ ಎಲ್ಲಾ ಕಡೆ 7 ಗಂಟೆ ವಿದ್ಯುತ್ ಕೊಡಲು ಸೂಚಿಸಿದ್ದೇನೆ ಎಂದ ಸಿಎಂ ಸಿದ್ದರಾಮಯ್ಯ

ಇಂದಿನಿಂದಲೇ ರೈತರ ಪಂಪ್ ಸೆಟ್ ಗಳಿಗೆ 7 ತಾಸು ವಿದ್ಯುತ್ ಒಡಗಿಸುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ಈ ಕುರಿತು ಸಿಎಂ ಸಿದ್ದರಾಮಯ್ಯ ಅಧಿಕೃತ ಘೋಷಣೆ ಮಾಡಿದ್ದಾರೆ.

ಕೆಲವರು 5 ಗಂಟೆ ಉಚಿತ ವಿದ್ಯುತ್ ಸಾಕು ಎಂದಿದ್ದರು.

ಆದ್ರೆ 5 ಗಂಟೆಗೆ ಸಾಕಾಗಲ್ಲ ಎಂಬ ಬೇಡಿಕೆ ಸಹ ಬಂದಿತ್ತು.

ಗೃಹಬಳಕೆಗಾಗಿ ವಿದ್ಯುತ್ ಪೂರೈಸುವ ಅವಧಿಯಲ್ಲಿ ಟ್ರಾನ್ಸ್‌ಫಾರ್ಮರ್‌ ಮೇಲೆ ಬೀಳುವ ಒತ್ತಡವನ್ನು ಕಡಿಮೆಗೊಳಿಸಬೇಕು.

ನೀರಾವರಿ ಪಂಪ್‌ಸೆಟ್‌ಗಳನ್ನು ಚಾಲು ಮಾಡದೇ ರೈತರು ಸಹಕರಿಸುವಂತೆ ಅವರು ಮನವಿ ಮಾಡಿದ್ದರು.

ಒಟ್ಟಾರೆ 7 ಗಂಟೆಗಳ ಕಾಲ ಉಚಿತ ವಿದ್ಯುತ್ ನೀಡುವುದು ರೈತ ಸಮುದಾಯಕ್ಕೆ ಅನುಕೂಲ ಒದಗಿಸುವ ಸಾಧ್ಯತೆ ಹೆಚ್ಚಾಗಿದೆ.