ದರ್ಶನ್ ಭೇಟಿ ಮಾಡಿಲ್ಲ ಸಿದ್ದಾರೂಢ!
ಕಳೆದ ಕೆಲದಿನಗಳಿಂದ ಸಿದ್ಧಾರೂಢ ಎನ್ನುವ ವ್ಯಕ್ತಿ ಭಯಂಕರ ಸದ್ದು ಮಾಡಿದ್ರು
ನಾನು ಅದೇ ಜೈಲಲ್ಲಿದ್ದೆ, ದರ್ಶನ್ VIP ಸೆಲ್ನಲ್ಲಿದ್ರು, ನಾನು ಅವರನ್ನು ಭೇಟಿ ಮಾಡಿದ್ದೇನೆ
ಅವರಿಗೆ ಧ್ಯಾನ ಮಾಡಲು ಕಲಿಸಿಕೊಟ್ಟಿದ್ದೇನೆ ಎಂದು ಸಿದ್ದಾರೂಢ ಹೇಳಿದ್ರು
ಆದ್ರೆ ಇದೀಗ ಬಂದ ಮಾಹಿತಿಗಳ ಪ್ರಕಾರ ಇದು ಯಾವುದು ಸತ್ಯವಲ್ಲವಂತೆ
ಮೇಲಾಧಿಕಾರಿಗಳು ಜೈಲಾಧಿಕಾರಿಗಳಿಗೆ ಸಿದ್ದಾರೂಢ - ದರ್ಶನ್ ಭೇಟಿ ಆಗಿದ್ದು ನಿಜಾನ ಎಂದು ಪ್ರಶ್ನಿಸಿದ್ದಾರೆ
ಈ ಸಂದರ್ಭದಲ್ಲಿ ಜೈಲಾಧಿಕಾರಿಗಳು ಹೀಗೆ ಉತ್ತರಿಸಿದ್ದಾರೆ
8ನೇ ತಾರೀಕು ಬಳ್ಳಾರಿಯಿಂದ ಪರಪ್ಪನ ಅಗ್ರಹಾರ ಜೈಲಿಗೆ ಬಂದ ಸಿದ್ದರೂಢರನ್ನು 9ಕ್ಕೆ ರಿಲೀಸ್ ಮಾಡಿದ್ದಾರೆ
ಈ ಮಧ್ಯೆ ಸಿದ್ದರೂಢರನ್ನು ದರ್ಶನ್ ಭೇಟಿಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ
ಹೀಗಿರುವಾಗ ಮಾಧ್ಯಮಗಳ ಮುಂದೆ ಸುಳ್ಳು ಮಾಹಿತಿಯನ್ನು ಹಂಚಿದ ಸಿದ್ದರೂಢ ಅವರನ್ನು ತನಿಖೆ ಮಾಡಲು ಜೈಲಾಧಿಕಾರಿಗಳು ಯೋಚಿಸಿದ್ದಾರೆ