ಎಂಟು ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಕಾಡಾನೆ ಕಾರ್ಯಾಚರಣೆ ವೇಳೆ ಅಸುನೀಗಿದೆ

ಗಜಕೇಸರಿ  ಸೇರಿದಂತೆ ಕೆಲ ಸಿನಿಮಾಗಳಲ್ಲಿ ಅರ್ಜುನ ಅಭಿನಯಿಸಿತ್ತು

ಮೈಸೂರು ದಸರಾದಲ್ಲಿ ಎಲ್ಲರ ಗಮನಸೆಳೆದ ಅರ್ಜುನ ಇನ್ನಿಲ್ಲ

ಸಕಲೇಶಪುರ ತಾಲೂಕಿನ ಯಸಳೂರು ವಲಯದ ಬಾಳೆಕೆರೆ ಫಾರೆಸ್ಟ್‌ನಲ್ಲಿ ಈ ದುರ್ಘಟನೆ ನಡೆದಿದ್ದು, ಕಾಡಾನೆ ಸೆರೆ ಕಾರ್ಯಾಚರಣೆಯ ವೇಳೆ ಅರ್ಜುನನ್ನು ಬಳಸಲಾಗಿತ್ತು

ಆದರೆ ಈ ಕಾರ್ಯಾಚರಣೆಯ ವೇಳೆ ಕಾಡಾನೆ ಅರ್ಜುನನ ಹೊಟ್ಟೆ ಭಾಗಕ್ಕೆ ತಿವಿದು ಸಾಯಿಸಿದ

ಹಳಿ ತಪ್ಪಿದ ಗೂಡ್ಸ್ ರೈಲು, ಈ ಟ್ರೈನ್‍ಗಳ ಸಂಚಾರ ರದ್ದು!

ಈ ಭಾಗದಲ್ಲಿ ನವೆಂಬರ್ 24 ರಿಂದಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ, ಕಾಡಾನೆ ಸ್ಥಳಾಂತರ ಕಾರ್ಯಾಚರಣೆ ಆರಂಭವಾಗಿತ್ತು

ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ದಸರಾದಿಂದ ನಿವೃತ್ತಿ ಪಡೆದ ನಂತರ ಅರ್ಜುನ ಆನೆ ಪುಂಡಾನೆ ಹಿಡಿಯುವ ಕಾಯಕದಲ್ಲಿ ನಿರತವಾಗಿತ್ತು

ಹಾಸನ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಲಾಗುತ್ತಿದೆ

ರೇಡಿಯೋ ಕಾಲರ್‌ನಿಂದ ಏನು ಪ್ರಯೋಜನ? ಅತಿ ಹೆಚ್ಚು ಆನೆಗಳು ಗುಂಪು ಗುಂಪಾಗಿ ಇರುವ ಕಡೆ ಮತ್ತು ಮನುಷ್ಯರ ಮೇಲೆ ದಾಳಿ ನಡೆಸುವ ಸಂಭವವಿರುತ್ತದೆ

ಹುಲಿ ಮತ್ತು ಆನೆಯ ನಡುವೆ ಯುದ್ಧ ಆದ್ರೆ ಯಾರು ಗೆಲ್ತಾರೆ ನೋಡಿ!

ಅದನ್ನು ತಡೆಗಟ್ಟಲು ಈ ರೇಡಿಯೋ ಕಾಲರ್ ಅಳವಡಿಕೆ ಸಹಕಾರಿಯಾಗುತ್ತದೆ

ಆನೆಗಳಿಗೆ ರೇಡಿಯೋ ಕಲರ್ ಅಳವಡಿಕೆ ಮಾಡುವುದರಿಂದ ಆನೆಗಳು ಎಲ್ಲಿವೆ ಮತ್ತು ಎಷ್ಟು ಅಂತರದಲ್ಲಿರುತ್ತವೆ ಎಂಬುದು ತಿಳಿಯುತ್ತದೆ

ಇದರಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಸಾರ್ವಜನಿಕರಿಗೆ ಆನೆಗಳು ಇಂತಹ ಕಡೆ ಇದೆ ಎಂದು ತಿಳಿಸಿ ಎಚ್ಚರಿಕೆ ವಹಿಸುವಂತೆ ಹೇಳುತ್ತಾರೆ

ಹೀಗೆ ಮಾಹಿತಿ ನೀಡುವುದಕ್ಕೆ ಅನುಕೂಲವಾಗುವ ರೀತಿಯಲ್ಲಿ ಈ ರೇಡಿಯೋ ಕಾಲರ್ ಕೆಲಸ ಮಾಡುತ್ತದೆ

ಹಾಲು ಕರೆಯಿರಿ, ಭರ್ಜರಿ ಬಹುಮಾನ ಗೆಲ್ಲಿ! ಈ ಯುವ ರೈತನ ಸಾಧನೆ ನೋಡಿ