ಮಾಜಿ ಕ್ಯಾಪ್ಟನ್ ಅರ್ಜುನನ ಬಗೆಗಿನ ಇಂಟೆರೆಸ್ಟಿಂಗ್ ವಿಷಯಗಳು!

1968ರಲ್ಲಿ ಅರಣ್ಯ ಸಿಬ್ಬಂದಿಗಳು ಅರ್ಜುನನನ್ನು ಸೆರೆಹಿಡಿದಿದ್ದರು 

ಅರ್ಜುನ ಪಳಗಿದ ಬಳಿಕ 1990ರ ದಶಕದಲ್ಲಿ ದಸರಾ ಮೆರವಣಿಗೆಯ ಕ್ಯಾಂಪ್‌ಗಳಲ್ಲಿ ಭಾಗವಹಿಸುತ್ತಿದ್ದ 

ಮಾವುತನೊಬ್ಬನನ್ನು ಸಾಯಿಸಿದ್ದ ಆರೋಪದಿಂದಾಗಿ ಅರ್ಜುನ ಒಂದೂವರೆ ದಶಕಗಳ ಕಾಲ ಕಾಡಿನಲ್ಲಿರಬೇಕಾಯಿತು 

ದಸರಾ ಕ್ಯಾಪ್ಟನ್ ಹಿಂದಿದೆ ದುರಂತ ಕಥೆ! 

ದಶಕದ ಹಿಂದೆ ಬಲರಾಮನ ನಿವೃತ್ತಿಯಾದಾಗ ಅರ್ಜುನನಿಗೆ ಅಂಬಾರಿ ಹೊರುವ ಜವಾಬ್ದಾರಿ ಸಿಕ್ಕಿತು 

ನಾಲ್ಕು ವರ್ಷದ ಹಿಂದೆ ಅಂಬಾರಿ ಹೊರುವ ಕಾಯಕದಿಂದ ನಿವೃತ್ತಿ ಹೊಂದಿದ್ದ ಅರ್ಜುನ

ಅರ್ಜುನನ ವಯಸ್ಸು 64 ವರ್ಷ

 'ದಸರಾ ಕ್ಯಾಪ್ಟನ್' ನಿಧನಕ್ಕೆ ಕಂಬನಿ ಮಿಡಿದ ಕರುನಾಡು.. 

ಮೈಸೂರು ದಸರಾದಲ್ಲಿ ಬರೋಬ್ಬರಿ 22-23 ವರ್ಷ ಭಾಗವಹಿಸಿದ್ದ ಅರ್ಜುನ

2012 ರಿಂದ 2019ರವರೆಗೆ ಮೈಸೂರು ದಸರಾದಲ್ಲಿ ಸುಮಾರು 8 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ

ಆನೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತಿದ್ದ ಅರ್ಜುನ 

ಇದೀಗ ಕಾಡಾನೆ ಕಾರ್ಯಾಚರಣೆ ವೇಳೆ ಮಾಜಿ ಕ್ಯಾಪ್ಟನ್ ಅರ್ಜುನ ವೀರ ಮರಣ ಹೊಂದಿದ್ದಾನೆ

ಅರ್ಜುನನ ಸಾವು; ಅದು ಬರೀ ಸಾವಲ್ಲ, ಕೊಲೆ?