'ನೀನೇನು ಉಪೇಂದ್ರಾನಾ?' ಮಂಡ್ಯದ ಜ್ಯೂನಿಯರ್ ಉಪೇಂದ್ರಗೆ ಶುರುವಾಯ್ತು ಸಂಕಷ್ಟ!

ಮನೆಯಿಂದ ಹೊರ ಹೋದ್ರೆ ಇಲ್ಲ ಸಲ್ಲದ ಪ್ರಶ್ನೆ ಮಾಡ್ತಾರೆ ಎಂದು ಮಹೇಶ್ ಅಲಿಯಾಸ್ ಜ್ಯೂನಿಯರ್ ಉಪೇಂದ್ರ ಮನೆ ಬಿಟ್ಟು ಹೋಗದೇ ಮನೆಯಲ್ಲೇ ಉಳಿದಿದ್ದಾರೆ

ನಟ ಉಪೇಂದ್ರ ಗಾದೆಮಾತು ಪ್ರಕರಣದಿಂದ ಮಂಡ್ಯದ ಜ್ಯೂನಿಯರ್ ಉಪೇಂದ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ

ಮಂಡ್ಯದ ಶ್ರೀರಂಗಪಟ್ಟಣದ ಪಾಲಹಳ್ಳಿ ಗ್ರಾಮದ ಮಹೇಶ್ ಎಂಬುವವರೇ ಜೂನಿಯರ್ ಉಪೇಂದ್ರ ಎಂದು ಖ್ಯಾತರಾಗಿದ್ದವರು

ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ

ನೋಡೋದಕ್ಕೆ ಥೇಟ್ ಉಪೇಂದ್ರರಂತೆ ಕಾಣುವ ಮಹೇಶ್ ಅವರನ್ನು ಜ್ಯೂನಿಯರ್ ಉಪೇಂದ್ರ ಎಂದೇ ಕರೆಯಲಾಗುತ್ತದೆ

ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅವರ ಗಾದೆಮಾತಿನ ಪ್ರಕರಣದಿಂದ ಮಹೇಶ್ ಅವರು ಹೋದ ಕಡೆಯಲ್ಲಿ ಪ್ರಶ್ನೆಗಳ ಸುರಿಮಳೆ ಎದುರಾಗುತ್ತಿದೆ

ಮಹೇಶ್ ಕಾರು ಅಡ್ಡಗಟ್ಟಿ ಕೆಲವರು ನೀನೇನು ಉಪೇಂದ್ರನಾ? ಉಪೇಂದ್ರ ಎಲ್ಲಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ

ಅಲ್ಲದೇ, ಇನ್ನು ಕೆಲವರು ಮಹೇಶ್ ಕಾರು ಫಾಲೋ ಮಾಡಿ ಸಮಸ್ಯೆ ಉಂಟು ಮಾಡುತ್ತಿದ್ದಾರೆ

ಹೀಗಾಗಿ ಮನೆಯಿಂದ ಹೊರ ಹೋದ್ರೆ ಇಲ್ಲಸಲ್ಲದ ಪ್ರಶ್ನೆ ಮಾಡ್ತಾರೆ ಎಂದು ಮಹೇಶ್ ಅವರು ಮನೆ ಬಿಟ್ಟು ಹೋಗದೇ ಮನೆಯಲ್ಲೇ ಉಳಿದಿದ್ದಾರೆ