ಕನ್ನಡ ಸಿನಿಮಾರಂಗದ ಫೇಮಸ್‌ ನಟ, ನಿರ್ದೇಶಕರಾದ ರಿಷಭ್ ಶೆಟ್ಟಿಗೆ ಬೆಸ್ಟ್‌ ಆ್ಯಕ್ಟರ್‌ ಅವಾರ್ಡ್‌ ಸಿಕ್ಕಿದೆ ಈ ಖುಷಿಯಲ್ಲಿ  ಸುದ್ದಿಗೋಷ್ಟಿ ಮಾಡಿದ ರಿಷಬ್‌ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ

ನಾನು ನಟನಾಗಿ, ನಿರ್ದೇಶಕನಾಗಿ ಈ ಯಶಸ್ಸು ಅಪ್ಪು ಮತ್ತು ದೈವ ನರ್ತಕರಿಗೆ ಅರ್ಪಿಸುತ್ತೇನೆ

ಕನ್ನಡ ಜನತೆಗೂ ಈ ಪ್ರಶಸ್ತಿ ಸಮರ್ಪಿಸುತ್ತಿದ್ದೇನೆ ಎಂದಿದ್ದಾರೆ

ನನ್ನ ಇಡೀ ಕಾಂತಾರ ತಂಡ ಶ್ರಮ ಇದರ ಹಿಂದೆಯಿದೆ, ನಮ್ಮ ಹೊಂಬಾಳೆ ಫಿಲಿಮ್ಸ್‌ಗೆ ಒಟ್ಟು ನಾಲ್ಕು ಪ್ರಶಸ್ತಿ ಬಂದಿದೆ

ಇದು ಕನ್ನಡ ಚಿತ್ರರಂಗದ ಯಶಸ್ಸು. ಈ ಪ್ರಶಸ್ತಿ ಗೆಲ್ಲುವ ಯಾವ ವಿಶ್ವಾಸವೂ ಇರಲಿಲ್ಲ. ಈ ಬಗ್ಗೆ ಮೊದಲು ರೂಮರ್ಸ್ ಬರ್ತಿತ್ತು ಆದರೆ ನ್ಯಾಷನಲ್ ಕಮಿಟಿಯಿಂದ ಪ್ರೆಸ್ ಮೀಟ್ ಮಾಡಿ ಹೇಳಿದಾಗ ಕನ್ಫರ್ಮ್ ಆಯ್ತು. ಈಗ ತುಂಬಾ ಖುಷಿಯಾಗುತ್ತಿದೆ.

ಮಮ್ಮುಟಿ ರೇಸ್‌‌ನಲ್ಲಿದ್ರು ಅನ್ನೋದು ಸಾಮಾಜಿಕ ಜಾಲತಾಣದದಲ್ಲಿ ನೋಡಿದೆ. ಅವರೂ ಜೊತೆಗೆ ಇದ್ರು ಅನ್ನೋದು ನನ್ನ ಪುಣ್ಯ

ಜನರೇ ದೊಡ್ಡದು, ಜನ ಸಿನಿಮಾ ನೋಡಿ ಮೆಚ್ಚಿಕೊಂಡರೇ ಅದೇ ದೊಡ್ಡದು, ಇದರ ಜೊತೆಗೆ ಒಂದು ರಾಷ್ಟ್ರೀಯ ಪ್ರಶಸ್ತಿ ಬರೋದು ಮತ್ತಷ್ಟು ಖುಷಿ. 

ಮ್ಯೂಸಿಕ್ ಡೈರೆಕ್ಟರ್ ಅಜನೀಷ್, ಡಿಓಪಿ ಇಡೀ ತಂಡಕ್ಕೆ ಧನ್ಯವಾದಗಳು ಇನ್ನೂ ಒಳ್ಳೆಯ ಸಿನಿಮಾ ನೀಡುವ ಪ್ರಯತ್ನ ಮಾಡುತ್ತೇನೆ. ಈ ಖುಷಿಗೆ ನನ್ನ ಹೆಂಡತಿ ಪ್ರಗತಿಗೆ ಎಷ್ಟೇ ಧನ್ಯವಾದ ಹೇಳಿದರೂ ಸಾಕಾಗಲ್ಲ ಎಂದು ನಟ ರಿಷಬ್‌ ರಿಯಾಕ್ಷನ್‌ ಕೊಟ್ಟಿದ್ದಾರೆ

70th National Award: ರಿಷಬ್ ಶೆಟ್ಟಿಗೂ ಮುನ್ನ ಈ ಇಬ್ಬರು ಕನ್ನಡ ನಟರಿಗೆ ಸಿಕ್ಕಿದೆ ಬೆಸ್ಟ್‌ ಆ್ಯಕ್ಟರ್‌ ಅವಾರ್ಡ್!