ಬೆಳಗಾವಿ: ಗೋಕಾಕ್  ಹೆಸರು ಕೇಳಿದ ತಕ್ಷಣವೇ ನೆನಪಾಗೋದು ಜಲಪಾತ, ಇಲ್ಲವೇ ಕರದಂಟು. ಹೀಗೆ ಗೋಕಾಕ್ ಜೊತೆ ಅಂಟಿಕೊಂಡ ಕರದಂಟಿನ ರಹಸ್ಯ ನಿಮಗೆ ಗೊತ್ತಾ? 

ಈ ಸಿಹಿ ಸಿಹಿಯಾದ ತಿಂಡಿಗೆ (Sweet) ಕರದಂಟು ಅಂತ ಯಾಕೆ ಹೆಸರು ಬಂತು? ಏನಿದರ ವಿಶೇಷತೆ ನೋಡಿ

ಕರದಂಟಿನ ರಹಸ್ಯ ಹೀಗೆ ಗೋಕಾಕ್ ಜತೆಗೆ ಬಿಡಸಲಾರದಂತೆ ಗಂಟು ಹಾಕಿಕೊಂಡ ಕರದಂಟಿಗೆ ಶತಮಾನಗಳ ಇತಿಹಾಸವಿದೆ

ಗೋಕಾಕಿನ ಅಜ್ಜ ಒಬ್ಬರು ಬೆಲ್ಲ, ಅಂಟು, ತುಪ್ಪ, ಒಣಹಣ್ಣು ಬೆರೆಸಿ ಚಕ್ಕೆ ರೀತಿಯ ಸಿಹಿ ಖಾದ್ಯ ತಯಾರಿಸಿದ್ರು. ಅದನ್ನು ಸುತ್ತ ಊರಿನ ಜಾತ್ರೆಗಳಲ್ಲಿ ಮಾರಾಟ ಮಾಡುತ್ತಾ ಇದ್ದರಂತೆ

ವೀಕೆಂಡ್‌ ಮಜಾಕ್ಕೆ ಬೀದರ್‌ ಕೋಟೆಗೆ ಬನ್ನಿ; ಇಲ್ಲಿನ ವೈಶಿಷ್ಟ್ಯತೆ ಕಂಡು ಬೆರಗಾಗ್ತೀರ!

ಅವರ ಕೈ ರುಚಿಯ ಸ್ವಾದಕ್ಕೆ ಜನ ಮರುಳಾದ್ರು. ಜನ ಗೋಕಾಕ್ ಅಜ್ಜನ ಕರದಂಟಿಗೆ ಬೇಡಿಕೆಯನ್ನೂ ಹೆಚ್ಚಿಸಿದರು

ಹೀಗೆ ಗೋಕಾಕಿನ ಅಜ್ಜ ಆರಂಭಿಸಿದ ಕರದಂಟು ಇಂದು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಪಡೆದಿದೆ

ಹೇಗೆ ತಯಾರಾಗುತ್ತೆ? ನಿಸರ್ಗದತ್ತವಾಗಿ ಸಿಗುವ ಅಂಟನ್ನು ಬಳಸಿಕೊಂಡು ಈ ಖಾದ್ಯವನ್ನು ತಯಾರಿಸುವುದು ಇದರ ವಿಶೇಷ. ಅಂಟನ್ನು ಕರೆದು ಮಾಡುವುದರಿಂದ ಇದಕ್ಕೆ ಕರದಂಟು ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ

ಬೆಲ್ಲ, ತುಪ್ಪ, ಬಾದಾಮಿ, ಕೊಬ್ಬರಿ, ಗೋಡಂಬಿ,ಪಿಸ್ತಾ, ಕತ್ತರಿಸಿದ ಅಂಜೂರ, ಒಣ ದ್ರಾಕ್ಷಿ, ಒಣ ಕುಂಬಳಕಾಯಿ ಬೀಜ, ಗಸಗಸೆ, ತುಪ್ಪ, ಖರ್ಜೂರ,

ಜಾಯಿಕಾಯಿ ಪುಡಿ, ಏಲಕ್ಕಿ ಪುಡಿ ಒಣಹಣ್ಣುಗಳಂತಹ ಪೌಷ್ಟಿಕಾಂಶವಿರುವ ಪದಾರ್ಥಗಳನ್ನು ಬಳಸಿ ತಯಾರು ಮಾಡಲಾಗುತ್ತೆ

 ಈ ಖಾದ್ಯ ಬಾಣಂತಿಯರಿಗೆ, ಕ್ರೀಡಾಪಟುಗಳಿಗೆ, ಬೆಳೆಯುವ ಮಕ್ಕಳಿಗೆ ಉತ್ತಮ ಎಂದು ಹೇಳಲಾಗುತ್ತದೆ

ನೂರು ವರ್ಷಗಳ ಇತಿಹಾಸ ಉಳ್ಳ ಈ ಕರದಂಟನ್ನು ಪ್ರವಾಸ ಹಾಗೂ ಉಪವಾಸಕ್ಕೂ ಬಳಸಲಾಗುತ್ತದೆ

ಸಾಮಾನ್ಯವಾಗಿ ಯಾವುದೇ ಸಿಹಿ ತಿಂಡಿ 15 ರಿಂದ 20 ದಿನ ಬಾಳಿಕೆ ಬರುತ್ತದೆ. ಅದರೆ ಈ ಗೋಕಾಕ್ ಕರದಂಟು ಆರು ತಿಂಗಳುಗಳ ಕಾಲ ಇದ್ದರೂ ಕ್ವಾಲಿಟಿ ಕಡಿಮೆ ಆಗಲ್ಲ

ಅನಗತ್ಯವಾಗಿ 2 ಬಾರಿ ಟೋಲ್ ಕಟ್ಬೇಕು, ನಮ್ಮ ಹಣ ಉಳಿಸು ಮಹದೇಶ್ವರಾ!