ತನ್ನ ವಿಭಿನ್ನ ಗಾಯನ, ಮನೋರಂಜನೆ ಮೂಲಕ ಭಾರೀ ಸುದ್ದಿಯಾಗಿದ್ದ ಸೋಶಿಯಲ್ ಮೀಡಿಯಾ ಸ್ಟಾರ್ ಕಾಫಿನಾಡು ಚಂದು ಎಲ್ಲೋಗಿದ್ದಾರೆ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ

 "ಹ್ಯಾಪ್ಪಿ ಬರ್ತ್ಡೇ ನಿಮಗೆ ವಂದನೆ, ಅಭಿನಂದನೆ" ಹೀಗಂತ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕ ಸಿಕ್ಕವರ ಬರ್ತ್ ಡೇ ಗೆ ವಿಶ್ ಮಾಡಿ ಫೇಮಸ್ ಆದವರು ಕಾಫಿನಾಡು ಚಂದು

ಆದ್ರೀಗ ಈ ಸೋಶಿಯಲ್ ಮೀಡಿಯಾ ಸ್ಟಾರ್ ಜಾಲತಾಣ ಬಿಡಿ ಎಲ್ಲೇ ಹುಡುಕಿದ್ರೂ ಕಾಣಸಿಗ್ತಿಲ್ಲ

ಎಲ್ಲಪ್ಪ ಈ ಶಿವಣ್ಣ, ಪುನೀತಣ್ಣನ ಫ್ಯಾನ್ ಅಂತಾ ಜನ ಹುಡುಕಾಡ್ತಿದ್ದಾರೆ. ಅಷ್ಟಕ್ಕೂ ಕಾಫಿನಾಡು ಚಂದು ಅಂದ್ರೆ ಸೋಶಿಯಲ್ ಮೀಡಿಯಾ, ಸೋಶಿಯಲ್ ಮೀಡಿಯಾ ಅಂದ್ರೇನೆ ಕಾಫಿನಾಡು ಚಂದು ಅಂತಿದ್ದ ಈ ವ್ಯಕ್ತಿ ಈಗ ಎಲ್ಲೋಗಿದ್ದಾರೆ ಅನ್ನೋದೆ ಎಲ್ಲರ ಪ್ರಶ್ನೆ

ಹಿರಿಯ ನಟ ಬ್ಯಾಂಕ್ ಜನಾರ್ದನ್​ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

ಹೌದು, ಸಾಮಾಜಿಕ ಜಾಲತಾಣ ಒಂದೇ ರಾತ್ರಿಗೆ ಯಾರನ್ನು ಬೇಕಾದರೂ ಹೀರೊ ಮಾಡಬಹುದು, ಝೀರೋನು ಮಾಡಬಹುದು ಅನ್ನೋದಕ್ಕೆ ಕಾಫಿನಾಡು ಚಂದು ಕೂಡಾ ಸಾಕ್ಷಿ

ಚಿಕ್ಕಮಗಳೂರಿನ ಅದ್ಯಾವುದೋ ಊರಿನಲ್ಲಿದ್ದ ಚಂದು ಇಡೀ ರಾಜ್ಯಕ್ಕೆ ಪರಿಚಿತರು. ಅದೆಷ್ಟರ ಮಟ್ಟಿಗೆ ಅಂದ್ರೆ ದೊಡ್ಡ ದೊಡ್ಡ ವೇದಿಕೆ, ಗಣ್ಯರ ಜೊತೆಗೂ ವೇದಿಕೆ ಹಂಚಿಕೊಂಡವರು

ಸದಾ ತಾನು ಶಿವಣ್ಣ ಪುನೀತಣ್ಣನ ಅನ್ನೋ ಮೂಲಕ ಸೋಶಿಯಲ್ ಮೀಡಿಯಾದ ತೆರೆ ಮೇಲೆ ಬರ್ತಿದ್ದ‌ ಅವರು ಈಗ ಕಾಣದಾಗಿದ್ದಾರೆ. ಫೇಸ್ಬುಕ್, ಇನ್ ಸ್ಟಾಗ್ರಾಮ್ ಎಲ್ಲೇ ಹುಡುಕಿದ್ರೂ ಕಾಫಿನಾಡು ಚಂದು ಪತ್ತೆಯಿಲ್ಲ

ಒಟ್ಟಿನಲ್ಲಿ ತನ್ನ ವಿಭಿನ್ನ ಗಾಯನ, ಮನೋರಂಜನೆ ಮೂಲಕ ಭಾರೀ ಸುದ್ದಿಯಾಗಿದ್ದ ಸೋಶಿಯಲ್ ಮೀಡಿಯಾ ಸ್ಟಾರ್ ಕಾಫಿನಾಡು ಚಂದು‌ ಎಲ್ಲೋಗಿದ್ದಾರೆ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ

 ಬರೋಬ್ಬರಿ 9 ಕೆಜಿ ತೂಕದ ಈರುಳ್ಳಿ ಬೆಳೆದ ರೈತ! ಫೋಟೋಗಳು ಇಲ್ಲಿವೆ ನೋಡಿ